Posts

Showing posts from May, 2025

ಕನ್ನಡಿಗ ನಟ ಡಿ ಎಸ್ ಮುರಳಿ

Image
 ಡಿ. ಎಸ್.  ಮುರಳಿ ಕನ್ನಡದವರಾದ ನಟ ಮುರಳಿ ಚಿತ್ರರಂಗದಲ್ಲಿ, ವಿಶೇಷವಾಗಿ ತಮಿಳು ಚಿತ್ರರಂಗದಲ್ಲಿ ಹೆಸರಾಗಿದ್ದು, ಸಣ್ಣ ವಯಸ್ಸಿನಲ್ಲೇ ನಿಧನರಾದರು.  ಮುರಳಿ ಅವರು 1964ರ ಮೇ 19ರಂದು ಚೆನ್ನೈನಲ್ಲಿ ಜನಿಸಿದರು.  ತಂದೆ ಕನ್ನಡ ಚಲನಚಿತ್ರರಂಗದ ಪ್ರಖ್ಯಾತ ನಿರ್ದೇಶಕರಾದ ಸಿದ್ಧಲಿಂಗಯ್ಯನವರು.  5ನೇ ತರಗತಿಯವರೆಗೆ ಚೆನ್ನೈನಲ್ಲಿ ಓದಿದ ಮುರಳಿ ಮಂದೆ 10ನೇ ತರಗತಿಯವರೆಗೆ ಬೆಂಗಳೂರಿನಲ್ಲಿ ಓದಿದರು. ಮುರಳಿ ತಮ್ಮ 14ನೇ ವಯಸ್ಸಿನಲ್ಲಿ ತಂದೆಯವರಿಗೆ ಸಹಾಯಕರಾಗಿ ಸಹ ನಿರ್ದೇಶನ, ಎಡಿಟಿಂಗ್ ಮುಂತಾದ ಕೆಲಸಗಳಲ್ಲಿ ತೊಡಗಿದರು.  ಮುರಳಿ,  ತಮ್ಮ ತಂದೆ ಸಿದ್ಧಲಿಂಗಯ್ಯ ಅವರು ನಿರ್ದೇಶಿಸಿದ 'ಪ್ರೇಮ ಪರ್ವ' ಚಿತ್ರದ ಮೂಲಕ ನಾಯಕ ನಟನಾಗಿ ಚಿತ್ರರಂಗಕ್ಕೆ ಬಂದರು. ಆ ಚಿತ್ರ ಬಿಡುಗಡೆ ಆದದ್ದು 1983ರಲ್ಲಿ.  ಆದರೆ ಮೊದಲು ಬಿಡುಗಡೆ ಆದ ಚಿತ್ರ ಯರಂಕಿ ಶರ್ಮಾ ಅವರು ನಿರ್ದೇಶಿಸಿದ 'ಗೆಲುವಿನ ಹೆಜ್ಜೆ' (1982).  ಬಿಳಿ ಗುಲಾಬಿ, ಅಜೇಯ, ಪ್ರೇಮ ಗಂಗೆ, ತಾಯಿ ಕೊಟ್ಟ ತಾಳಿ, ಸಂಭವಾಮಿ ಯುಗೇ ಯುಗೇ, ಅಜಯ್ ವಿಜಯ್ ಅವರು ನಟಿಸಿದ ಇತರ ಕನ್ನಡ ಚಿತ್ರಗಳು. ಮುರಳಿ ಅವರು ಹೆಚ್ಚು ಜನಪ್ರಿಯರಾಗಿದ್ದು ತಮಿಳು ಚಿತ್ರರಂಗದಲ್ಲಿ. ಅವರ ಚರ್ಯೆ ಮತ್ತು ಅಭಿನಯ ಪ್ರತಿಭೆಗಳನ್ನು ತಮಿಳು ಚಿತ್ರರಂಗದ ತನ್ನದಾಗಿ ಕಂಡು ಅವರನ್ನು ಎತ್ತರಕ್ಕೆ ಬೆಳೆಸಿತು. ಮುರಳಿ ತಮಿಳಿನಲ್ಲಿ 'ಪೂವಿಳಂಗು' ಚಿತ್ರದಲ್ಲಿ ಮೊದಲು ನಟಿಸಿದರು...

ಸೆಕ್ಯೂರಿಟಿ ಗಾರ್ಡ್ಮೋ ಸಿನಿಮಾ ನಂತನಾಗಿದ್ದು ಮೋಹನ್ ಜುನೇಜಾ

Image
 ಮೋಹನ್ ಜುನೇಜಾ ಮೋಹನ್ ಜುನೇಜಾ ಕನ್ನಡದ ಪ್ರಸಿದ್ಧ ನಟರಾಗಿದ್ದವರು. ಅವರು ತಾವು ಮಾಡಿದ ಜುನೇಜಾ ಎಂಬ ಪಾತ್ರದ ಹೆಸರನ್ನು ಸೇರಿಸಿಕೊಂಡು ಮೋಹನ್ ಜುನೇಜಾ ಎಂದು ಹೆಸರಾಗಿದ್ದರು. ಇಂದು ಅವರ ಸಂಸ್ಮರಣೆ ದಿನ. ಬೆಂಗಳೂರಿನಲ್ಲಿ ಜನಿಸಿದ ಮೋಹನ್  ಅವರ ಕುಟುಂಬದವರು ಮೂಲತಃ ತುರುವೇಕೆರೆಗೆ ಸೇರಿದವರು. ಅವರ ತಂದೆ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದು ನೆಲೆಸಿದರು.  ತಂದೆ ಕೆಲಸದ ಮೇಲೆ ವರ್ಗಾವಣೆ ಆಗುತ್ತಿದ್ದ ಮೂರ್ನಾಲ್ಕು ಕಡೆ ಇವರ ವಿದ್ಯಾಭ್ಯಾಸ ನಡೆಯಿತು. ಚೆನ್ನಾಗಿ ಓದುತ್ತಿದ್ದ ಹುಡುಗ ಮೋಹನ್ ಅವರಿಗೆ ಕ್ರಮೇಣ ಶಾಲೆಗೆ ಹೋಗುವುದು ನೆಪವಾಗಿ ಸಿನಿಮಾಗೆ ಹೋಗುವ ಚಪಲ ಬದುಕಿನ ದಿಕ್ಕು ಬದಲಿಸಿತು.  ಮೋಹನ್ ಜುನೇಜಾ ಸೆಕ್ಯೂರಿಟಿ ಗಾ ರ್ಡ್‌ ಆಗಿ, ಫೋಟೋಗ್ರಾಫರ್‌ ಆಗಿ, ಟೈಲರ್ ಅಂಗಡಿಗೆ ಹೋಗಿ ಗುಂಡಿ ಹೊಲಿದವರಾಗಿ ಹಲವು ರೀತಿ ಬದುಕು ನಡೆಸಿದರು. ಮುಂದೆ ರಂಗಶಾಲೆ ಸೇರಿಕೊಂಡು ದಾರಿ ಬದಲಾಯಿಸಿಕೊಂಡರು.  ಹಲವು ನಾಟಕ, ಬೀದಿ ನಾಟಕಗಳಲ್ಲಿ ನಟಿಸಿದರು. ವಠಾರ ಧಾರಾವಾಹಿಯ ಮೂಲಕ  ಕಿರುತೆರೆಗೆ ಬಂದರು.  ವಾಲ್ ಪೋಸ್ಟರ್ ಸಿನಿಮಾದ ಮೂಲಕ ಸಿನಿ ರಂಗಕ್ಕೆ ಬಂದ ಮೋಹನ್ ಜುನೇಜಾ ಚೆಲ್ಲಾಟ ಚಿತ್ರದಿಂದ ಹೆಸರಾದರು. ಜೋಗಿ, ಕಬ್ಜ, ಜೇಮ್ಸ್ ಹೀಗೆ ಐನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಮೂಡಿ ಎಲ್ಲೆಡೆ ಜಯಭೇರಿ ಬಾರಿಸಿರುವ ಇತ್ತೀಚಿನ  ಕೆಜಿಎಫ್ 2 ಚಿತ್ರದಲ್ಲೂ ಪಾತ್ರ ಮಾಡಿದ್ದರು. ಕಿರುತೆರೆ ಮತ್ತು ಸಿನಿಮಾ ಎ...

ಪುರುಷನನ್ನು ಪ್ರೀತಿಸಲು ಹೇಗೆಂದು ತಿಳಿಯಿರು

Image
  ಪುರುಷನನ್ನು ಪ್ರೀತಿಸುವುದು ಹೇಗೆ...ನೀವು ಓದಲೇಬೇಕು  ಒಬ್ಬ ವ್ಯಕ್ತಿಯನ್ನು ಪ್ರೀತಿಸುವುದು ಎಂದರೆ ಅವನನ್ನು ಸಂಪೂರ್ಣವಾಗಿ ನೋಡುವುದು - ಅವನ ಸಾಮರ್ಥ್ಯಗಳಿಗಾಗಿ ಮಾತ್ರವಲ್ಲ, ಅವನ ನ್ಯೂನತೆಗಳಿಗಾಗಿಯೂ ಸಹ. ಪುರುಷರು ಬಲಶಾಲಿಗಳಾಗಿರಬೇಕು ಎಂದು ನಿರೀಕ್ಷಿಸುವ, ಆದರೆ ಅವರನ್ನು ಎಂದಿಗೂ ಸೌಮ್ಯವಾಗಿರಲು ಬಿಡದ ಈ ಜಗತ್ತಿನಲ್ಲಿ ಅವನಿಗೆ ಸ್ವಂತಿಕೆ, ಸ್ಥಳ ಮತ್ತು ವಾತ್ಸಲ್ಯವನ್ನು ನೀಡುವುದು ಇದರ ಅರ್ಥ. ನಿಜವಾದ ಪ್ರೀತಿ ಎಂದರೆ ಅವಳನ್ನು ಬದಲಾಯಿಸಲು ಪ್ರಯತ್ನಿಸುವುದಲ್ಲ, ಬದಲಾಗಿ ಪ್ರತಿದಿನ ಅವಳನ್ನು ಮತ್ತೆ ಆರಿಸಿಕೊಳ್ಳುವುದು - ಅವಳನ್ನು ಪ್ರೀತಿಸುವುದು ಕಷ್ಟವೆನಿಸಿದರೂ ಸಹ. ಇದನ್ನು ಅರ್ಥ ಮಾಡಿಕೊಳ್ಳಿ.... ಅವನು ಯಾವಾಗಲೂ ಒಂದೇ ರೀತಿ ವರ್ತಿಸುವುದಿಲ್ಲ. ಅವನ ಮೌನವು ದೂರವಾಗಿರದೆ, ಆಯಾಸವಾಗಿರುವ ದಿನಗಳು ಬರುತ್ತವೆ.ಅವನಿಗೆ ತನ್ನ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದ ದಿನಗಳು ಏಕೆಂದರೆ ಅವುಗಳನ್ನು ಮರೆಮಾಡಲು ಅವನಿಗೆ ಕಲಿಸಲಾಗಿದೆ.ಅವನು ಪರಿಪೂರ್ಣನಲ್ಲ ಎಂದು ಅರ್ಥಮಾಡಿಕೊಳ್ಳಿ - ಮತ್ತು ಅವನು ಹಾಗೆ ಆಗಲು ಪ್ರಯತ್ನಿಸುತ್ತಿಲ್ಲ.ಅವನೂ ಕೆಲವೊಮ್ಮೆ ಗೊಂದಲಕ್ಕೊಳಗಾಗುತ್ತಾನೆ, ಹೆದರುತ್ತಾನೆ ಮತ್ತು ಸುಸ್ತಾಗುತ್ತಾನೆ.ಅವನ ಜೊತೆ ನಿಲ್ಲು - ಅವನನ್ನು ಮುಂದೆ ತಿದ್ದಲು ಅಲ್ಲ, ಹಿಂದೆ ಹಿಂಬಾಲಿಸಲು ಅಲ್ಲ, ಆದರೆ ಅವನೊಂದಿಗೆ ಸಮಾನರಾಗಿ ಬೆಳೆಯಲು. ಸ್ವಾತಂತ್ರ್ಯ.... ಅವನು ಉಸಿರಾಡಲಿ. ಅವನು ಜೀವಂತವಾಗಿರುವುದನ...

ಆಕಾರದಲ್ಲಿ ಗುಲಾಬಿ ರಂಗಿದೆ ಈ ಕಣ್ಗಳಲ್ಲಿ ಶರಾಬು ತುಂಬಿದೆ ಥಳಕು

Image
  ಆಕಾರದಲ್ಲಿ ಗುಲಾಬಿ ರಂಗಿದೆ ಈ ಕಣ್ಗಳಲ್ಲಿ ಶರಾಬು ತುಂಬಿದೆ  ಥಳಕು ಬಳಕಿನ ಮೈಮಾಟವೀಗ ದಢೂತಿಯಾಗಿದೆ. ಕಣ್ಣುಗಳಲ್ಲಿ ಮಾದಕತೆ ಬದಲು ನಶೆ. ಜೀವನವೇ ಬೇಡೆಂದು ಕುಡಿತಕ್ಕೆ ದಾಸಿಯಾಗಿ, ಮಕ್ಕಳನ್ನೂ ಕಡೆಗಣಿಸಿ, ಸಾವಿಗೆ ಹಪಹಪಿಸುತ್ತಾ ಬದುಕು ಸಾಗಿಸುತ್ತಿದ್ದಳು ಒಂದು ಕಾಲದ ಪಡ್ಡೆ ಹುಡುಗರ ಕಣ್ಮಣಿ ಡಿಸ್ಕೋ ಶಾಂತಿ. ಅದಕ್ಕೆ ಕಾರಣ, ತಾನು ಪ್ರೀತಿಸಿ ಮದುವೆಯಾಗಿ, 23 ವರ್ಷ ಸುಖ ದಾಂಪತ್ಯ ನಡೆಸಿ, ಇಬ್ಬರು ಗಂಡು ಮಕ್ಕಳ ತಾಯಿಯಾಗಿ, ಅಪ್ಪಟ ಗೃಹಿಣಿಯಂತೆ ಜೀವನ ಸಾಗಿಸುತ್ತಿದ್ದ ಡಿಸ್ಕೋಶಾಂತಿ ಬದುಕಲ್ಲಿ ಬಿರುಗಾಳಿ ಎಬ್ಬಿಸಿದ್ದು ಆಕೆಯ ಗಂಡ, ತೆಲುಗಿನ ಖ್ಯಾತ ನಟ ಶ್ರೀಹರಿ ಅಕಾಲಿಕ ಸಾವು. ೮೦-೯೦ರ ದಶಕದ ಸಿನಿಪ್ರಿಯರ ಹಾಟ್ ಫೇವರಿಟ್ ಡಿಸ್ಕೋ ಶಾಂತಿ.‌ ಮಡಿವಂತರು ಮೂಗು ಮುರಿಯುತ್ತಿದ್ರೆ ಪಡ್ಡೆಗಳ ನಿದ್ದೆ ಕೆಡಿಸುವಂತಿದ್ದಳು. ಈಗಿನ ಐಟಂ ಡಾನ್ಸ್ ಅಂದಿನ ಕ್ಯಾಬರೆ. ಅದರಲ್ಲಿ ಡಿಸ್ಕೊಶಾಂತಿ ಟಾಪ್. ಅಂಥ ಡಿಸ್ಕೋ ಶಾಂತಿಗೆ ಈಗ 60 ವರ್ಷ. ಮೊನ್ನೆ ತಮಿಳು ಯೂಟ್ಯೂಬ್‌ವೊಂದರಲ್ಲಿ ಡಿಸ್ಕೋಶಾಂತಿ ಸಂದರ್ಶನ ನೋಡಲು ಸಿಕ್ಕಿತು. ಅಂದಿನ ತನ್ನ ಮಾದಕ ಮೈಮಾಟದಿಂದ ದಕ್ಷಿಣ ಭಾರತವಷ್ಟೇ ಅಲ್ಲ ಬಾಲಿವುಡ್‌, ಒಡಿಯಾ ಸೇರಿ ೯೦೦ ಚಿತ್ರಗಳಲ್ಲಿ ಕುಣಿದು ಕುಪ್ಪಳಿಸಿದ್ದ ಡಿಸ್ಕೋ ಶಾಂತಿ ಈಗ ಹೇಗಿದ್ದಾರೆ ಗೊತ್ತಾ? ಕ್ಯಾಬರೆ ಡಾನ್ಸ್‌ ಮೂಲಕ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಬಿರುಗಾಳಿ ಎಬ್ಬಿಸಿದ್ದ ಶಾಂತಕುಮಾರಿ ಅಲಿಯಾಸ್‌ ಡಿಸ್ಕೋ ಶಾಂತಿ ಬದುಕು ಮ...